Sunday, September 17, 2017

Kannada Devotional Song, "Tale Baagi Banni ..." ("ತಲೆ ಬಾಗಿ ಬನ್ನಿ ...")

Song Lyrics:

ಗೋಕರ್ಣ ಕ್ಷೇತ್ರ ನಿಲಯಮ್ , ದ್ವಿಭುಜಮ್ ವರದಂ ಸತಾಮ್
ಸರ್ವಾಭೀಷ್ಟ ಪ್ರಸೀಧ್ಯರ್ಥಂ ತಮ್ ನಮಾಮಿ ಗಜಾನನಂ                

ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ                                                                                      || ಪಲ್ಲವಿ ||

ಆರು ವೈರಿಗಳಿಂದ ಪಡೆದ ಪಾಪ, ಏಳು ಜನ್ಮವು ಬರುವ ವ್ಯಾಧಿ ರೂಪ
ಆರು ವೈರಿಗಳಿಂದ ಪಡೆದ ಪಾಪ, ಏಳು ಜನ್ಮವು ಬರುವ ವ್ಯಾಧಿ ರೂಪ
ಪಂಚ ಪಾತಕ ಕೂಡ ಭಸ್ಮವಾಗೇ, ಶರಣೆನ್ನಿ ಶಿವನಿಗೆ ಬೇಗೆ ನೀಗೆ                           || ಚರಣ ೧ ||
ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ

ಶಿವನ ಪ್ರಾಣದ ಪಂಚ ಬ್ರಹ್ಮ ರೂಪ, ಧರೆಯ ಮೇಲಿಹ ದಿವ್ಯ ಲಿಂಗ ರೂಪ
ಶಿವನ ಪ್ರಾಣದ ಪಂಚ ಬ್ರಹ್ಮ ರೂಪ, ಧರೆಯ ಮೇಲಿಹ ದಿವ್ಯ ಲಿಂಗ ರೂಪ
ಕ್ಷೇತ್ರ ಗೋಕರ್ಣದ ಕೀರ್ತಿ ರೂಪ , ಮಹಾಬಲೇಶ್ವರ ನೀನೆ ಸರ್ವ ರೂಪ               || ಚರಣ ೨ ||
ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ

--------------
Lyrics: Vijaya Naarasimha
Music: M. Ranga Rao
Singer: P. B. Srinivas
Raag: Malkauns (in Hindusthani Music) | Hindolam (in Carnatic Music)

Friday, September 8, 2017

Kannada Movie Song: “Bhaavavemba Hoovu AraLi..." (ಕನ್ನಡ ಚಿತ್ರಗೀತೆ: " ಭಾವವೆಂಬ ಹೂವು ಅರಳಿ …")

Song Lyrics:
ಆಹಾ..., ಆಹಾ ...
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ                       ।। ಪಲ್ಲವಿ ।।

ದಗಮದ, ಗಾಮಾದ
ಸಮದನಿ, ಸಾದಾನಿ

ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ಒಲಿಯದ ದೇವರೇ ಇಲ್ಲ, ಗಾನವೇ ತುಂಬಿದೆ ಈ ಜಗವೆಲ್ಲಾ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ                  ।। ಚರಣ ೧ ।।

ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ, ಶಿವನ ಕಂಡರು ವಚನವ ಹಾಡಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ                ।। ಚರಣ ೨ ।।

ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ಕುಣಿಯಿತು ನಾರದರ ಗಾನದಲ್ಲಿ, ತಣಿಯಿತು ಕೃಷ್ಣನ ಮುರಳಿಯಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ 
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ                                                    ।। ಚರಣ ೩ ।।
————————————————————————————————-
ಚಿತ್ರ: ಉಪಾಸನೆ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯ ಶಂಕರ
ಹಿನ್ನೆಲೆ ಗಾಯನ: ವಾಣಿ ಜಯರಾಮ್
ರಾಗ: ಮಾಲ್ಕೌಂಸ್ (ಹಿಂದೋಳಮ್)

Thursday, August 17, 2017

Kannada Movie Song: "Ee Bhoomi BaNNada Buguri ..." (ಕನ್ನಡ ಚಿತ್ರಗೀತೆ: "ಈ ಭೂಮಿ ಬಣ್ಣದ ಬುಗುರಿ ...")

Song Lyrics:
ಓ ಒಹೋ ಒಹೋ, ಓ ಒಹೋ ಒಹೋ
ಓ ಒಹೋ ಒಹೋ, ಓ ಒಹೋ ಒಹೋ
ಈ  ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ
ಕಾಲಾ ಕ್ಷಣಿಕ ಕಣೋ, ಓ ಓ ಓ ...
ಈ  ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ      ।। ಪಲ್ಲವಿ ।।

ಮರಿಬೇಡ ತಾಯಿಯ ಋಣವ, ಮರಿಬೇಡ ತಂದೆಯ ಒಲವ, ಹಡೆದವರೇ ದೈವ ಕಣೋ,
ಸುಖವಾದ ಭಾಷೆಯ ಕಲಿಸೋ, ಸರಿದ್ಯಾ ದಾರಿಗೆ ನಡೆಸೋ, ಸಂಸ್ಕ್ರತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯಏಟ, ಕಾಲ ಕ್ಷಣಿಕ ಕಣೋ, ಓ ಓ ಓ ...  
ಈ  ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ       ।। ಚರಣ  ೧ ।।
ಓ ಒಹ:ಹ: ಓ ಓಹ ಓಹ ಓ
ಮರಿಬೇಡ ಮಗುವಿನ ನಗುವ, ಕಳಿಬೇಡ ನಗುವಿನ ಸುಖವ, ಭರವಸೆಯೇ ಮಗುವು ಕಣೆ
ಕಳಬೇಡ ಕೊಲ್ಲಲುಬೇಡ, ನೀ ಹಾಡು ಶಾಂತಿಯ ಹಾಡ, ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ, ಎಲ್ಲಾರು ಒಂದೇ ಓಟ, ಕಾಲಾ ಕ್ಷಣಿಕ ಕಣೋ, ಓ ಓ ಓ ..   ।। ಚರಣ ೨ ।।

ಈ  ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ, ನೀನಿದರ ಮೇಟಿ ಕಣೋ

——————————————————————————
ಸಾಹಿತ್ಯ ಹಾಗೂ ಸಂಗೀತ: ಹಂಸಲೇಖ
ಹಿನ್ನೆಲೆ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ
ಚಿತ್ರ: ಮಹಾ ಕ್ಷತ್ರಿಯ

Monday, July 24, 2017

Kannada Movie Song: "Madhura Naada Haridu Haridu ..." (ಕನ್ನಡ ಚಿತ್ರಗೀತೆ: "ಮಧುರ ನಾದ ಹರಿದು ಹರಿದು ...")

Song Lyrics:
ಮಧುರ ನಾದ, ಹರಿದು ಹರಿದು ...
ಆ.... ಆಆ.... ಹೂಂ...
ಮಧುರ ನಾದ ಹರಿದು ಹರಿದು, ಮುದದಿ ಹೃದಯ ಅರಳಲಿ
ತೆರೆದ ನಲಿವ ಬಾನಿನಲ್ಲಿ, ಭಾವ ಕಿರಣ ಸೂಸಲಿ
ಮಧುರ ನಾದ, ಹರಿದು ಹರಿದು, ಮುದದಿ ಹೃದಯ ಅರಳಲಿ  ।। ಪ ।।

ಒಲದ ನಭಕೆ ಹಾರಿ ಹಾರಿ, ಸುಖದ ನೆಲೆಯ ಸೇರಿ ಸೇರಿ
ಒಲದ ನಭಕೆ ಹಾರಿ ಹಾರಿ, ಸುಖದ ನೆಲೆಯ ಸೇರಿ ಸೇರಿ
ಪ್ರೀತಿಮಾತ ಜೇನ ಸುರಿಸಿ, ಎದೆಯ ತುಂಬಾ ಹಾಡಿ ಹಾಡಿ
ಮಧುರ ನಾದ ಹರಿದು ಹರಿದೂ                                       || ಚ ।।

ನಗೆಯ ಮೇರು ಶಿಖರದಲ್ಲಿ, ತೆರೆಯ ಪ್ರೇಮ ಕಂದರದಲ್ಲಿ
ನಗೆಯ ಮೇರು ಶಿಖರದಲ್ಲಿ, ತೆರೆಯ ಪ್ರೇಮ ಕಂದರದಲ್ಲಿ
ಬಿಳಿಯ ಚೆಲುವ ದೋಣಿಯಲ್ಲಿ, ಬಾಳ ತೀರ ಸೇರಲಿ
ಮಧುರ ನಾದ ಹರಿದು ಹರಿದು, ಮುದದಿ ಹೃದಯ ಅರಳಲಿ     ।। ಚ ।।

ಮನದ ಚಿಂತೆ ಎಲ್ಲ ಮರೆಸಿ, ಶಾಂತಿ ಸಿರಿಯ ಗೆಲುವ ಬೆರೆಸಿ
ಮನದ ಚಿಂತೆ ಎಲ್ಲ ಮರೆಸಿ, ಶಾಂತಿ ಸಿರಿಯ ಗೆಲುವ ಬೆರೆಸಿ
ನಿನ್ನ ಖ್ಯಾತಿ ಅಮರವಾಗೇ, ದೇವಾನುಗ್ರಹವಾಗಲಿ                   ।। ಚ ।।

ಮಧುರ ನಾದ ಹರಿದು ಹರಿದು, ಮುದದಿ ಹೃದಯ ಅರಳಲಿ
ತೆರೆದ ನಲಿವ ಬಾನಿನಲ್ಲಿ, ಭಾವ ಕಿರಣ ಸೂಸಲಿ
ಮಧುರ ನಾದ ಹರಿದು ಹರಿದು, ಮುದದಿ ಹೃದಯ ಅರಳಲಿ

Title: Madhura Naada Haridu Haridu ...
Film: ??? (Kannada)
Lyrics: ???
Music: ???
Playback Singer: S. Janaki
Raaga: Khamaj? (Khamach in Carnatic Music)
Taal: ??? 

Monday, January 30, 2017

Kannada Movie Song: "Aaseya Bhava, Olavina Jeeva ..." (ಕನ್ನಡ ಚಿತ್ರಗೀತೆ: "ಆಸೆಯ ಭಾವ, ಒಲವಿನ ಜೀವ ...")

Song Lyrics:
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ

ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ    ||ಪಲ್ಲವಿ||

ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವಾ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದಾ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೆರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ  ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ     ||೧||

ಹೆಮ್ಮೆಯ ಹೆಜ್ಜಿಸುವ ಈ ನಡೆ ಗಂಭೀರ
ಹಮ್ಮಿನ ಹೃದಯವೇ ಪ್ರೀತಿಯ ಸಾಗರ
ಚೆನ್ನಿಗ ಚೆಂದಿರನ ಸ್ನೇಹದ ಕಾನಿಕೆ
ಹೊಂದಿದ ಭಾಗ್ಯವು ನನ್ನದು ಇಂದಿಗೆ
ಪೂಜೆಯ ಪುನ್ಯವೆನ ಕಣ್ಣ ಮುಂದೆ ಬಂದು ನಿಂತಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ     ||೨||

ಸನಿಹದ ಸುಖದಲ್ಲಿ, ಸ್ನೇಹದ ಕಂಪಿನಲಿ
ಸಂಯಮ ನಿಲ್ಲದೆ ಸಂಗಮ ಬೇಡಿದೆ
ಕೂಡಿದ ಹೃದಯಗಳ ಹಂಬಲ ಕೈಸೇರಿ
ಮೆರೆಯ ಇಲ್ಲದ ಮಧುರಕೆ ತುಂಬಿದೆ
ಮಾಂಗಲ್ಯ ಭಾಗ್ಯದಿಂದ ಎಂದು ನಮ್ಮ ಬಾಳು ಬೆಳಗಿದೆ
ಪ್ರೇಮದ ಜೋಡಿ, ದೇವರ ಬೇಡಿ, ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಆಸೆಯ ಭಾವ, ಒಲವಿನ ಜೀವ, ಒಂದಾಗಿ ಬಂದಿದೆ    ||೩||

Title: Aaseya Bhava Olavina Jeeva
Film: Mangalya Bhagya (Kannada)
Lyrics: Vijaya Naaıasimha
Music: Rajan - Nagendra
Playback Singer: S. Janaki
Raaga: Bhimpalasi (Abheri in Carnatic Music)
Taal: ??? 

Kannada Bhaavageete: "Yaava Nelada Gandha ..." (ಕನ್ನಡ ಭಾವಗೀತೆ: "ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ ...")

Actual Lyrics:
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ ||ಪ||

ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ
ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ
ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ ||೧||

ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ
ಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋ
ಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ ||೨||

ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋ
ರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋ
ಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ ||೩||

Song Lyrics:
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ

ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ
ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ
ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋ
ತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋ
ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ
ಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ

ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ
ಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋ
ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋ
ಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋ
ಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ
ಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ


ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋ
ರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋ

ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋ
ರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋ
ಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ
ಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ
ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋ
ಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ
ಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ

Lyricist: ???
Sample Audio: https://www.youtube.com/watch?v=NefkjAapVPI
Music Composition: Vasant Kanakapur
Singer: B. R. Chaya
Raag: Yaman (Kalyani)
Taal: ???