Sunday, September 17, 2017

Kannada Devotional Song, "Tale Baagi Banni ..." ("ತಲೆ ಬಾಗಿ ಬನ್ನಿ ...")

Song Lyrics:

ಗೋಕರ್ಣ ಕ್ಷೇತ್ರ ನಿಲಯಮ್ , ದ್ವಿಭುಜಮ್ ವರದಂ ಸತಾಮ್
ಸರ್ವಾಭೀಷ್ಟ ಪ್ರಸೀಧ್ಯರ್ಥಂ ತಮ್ ನಮಾಮಿ ಗಜಾನನಂ                

ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ                                                                                      || ಪಲ್ಲವಿ ||

ಆರು ವೈರಿಗಳಿಂದ ಪಡೆದ ಪಾಪ, ಏಳು ಜನ್ಮವು ಬರುವ ವ್ಯಾಧಿ ರೂಪ
ಆರು ವೈರಿಗಳಿಂದ ಪಡೆದ ಪಾಪ, ಏಳು ಜನ್ಮವು ಬರುವ ವ್ಯಾಧಿ ರೂಪ
ಪಂಚ ಪಾತಕ ಕೂಡ ಭಸ್ಮವಾಗೇ, ಶರಣೆನ್ನಿ ಶಿವನಿಗೆ ಬೇಗೆ ನೀಗೆ                           || ಚರಣ ೧ ||
ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ

ಶಿವನ ಪ್ರಾಣದ ಪಂಚ ಬ್ರಹ್ಮ ರೂಪ, ಧರೆಯ ಮೇಲಿಹ ದಿವ್ಯ ಲಿಂಗ ರೂಪ
ಶಿವನ ಪ್ರಾಣದ ಪಂಚ ಬ್ರಹ್ಮ ರೂಪ, ಧರೆಯ ಮೇಲಿಹ ದಿವ್ಯ ಲಿಂಗ ರೂಪ
ಕ್ಷೇತ್ರ ಗೋಕರ್ಣದ ಕೀರ್ತಿ ರೂಪ , ಮಹಾಬಲೇಶ್ವರ ನೀನೆ ಸರ್ವ ರೂಪ               || ಚರಣ ೨ ||
ತಲೆ ಬಾಗಿ ಬನ್ನಿ, ವಟುರೂಪಿ ಗಣಪನಿಗೆ
ಗೋಕರ್ಣದಲಿ ನಿಂತ ದ್ವಿಭುಜ ಮೂರುತಿಗೆ
ತಲೆ ಬಾಗಿ ಬನ್ನಿ

--------------
Lyrics: Vijaya Naarasimha
Music: M. Ranga Rao
Singer: P. B. Srinivas
Raag: Malkauns (in Hindusthani Music) | Hindolam (in Carnatic Music)

Friday, September 8, 2017

Kannada Movie Song: “Bhaavavemba Hoovu AraLi..." (ಕನ್ನಡ ಚಿತ್ರಗೀತೆ: " ಭಾವವೆಂಬ ಹೂವು ಅರಳಿ …")

Song Lyrics:
ಆಹಾ..., ಆಹಾ ...
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ                       ।। ಪಲ್ಲವಿ ।।

ದಗಮದ, ಗಾಮಾದ
ಸಮದನಿ, ಸಾದಾನಿ

ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ, ಗಾನಕೆ ಮಣಿಯದ ಜೀವವೇ ಇಲ್ಲ
ಗಾನಕೆ ಒಲಿಯದ ದೇವರೇ ಇಲ್ಲ, ಗಾನವೇ ತುಂಬಿದೆ ಈ ಜಗವೆಲ್ಲಾ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ                  ।। ಚರಣ ೧ ।।

ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ, ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ, ಶಿವನ ಕಂಡರು ವಚನವ ಹಾಡಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ                ।। ಚರಣ ೨ ।।

ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ವಿಶ್ವವೇ ಅರಳಿತು ಓಂಕಾರದಲಿ, ವಾಣಿಯ ವೀಣೆಯ ಝೇಂಕಾರದಲಿ
ಕುಣಿಯಿತು ನಾರದರ ಗಾನದಲ್ಲಿ, ತಣಿಯಿತು ಕೃಷ್ಣನ ಮುರಳಿಯಲಿ
ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧಚೆಲ್ಲಿ 
ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ                                                    ।। ಚರಣ ೩ ।।
————————————————————————————————-
ಚಿತ್ರ: ಉಪಾಸನೆ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯ ಶಂಕರ
ಹಿನ್ನೆಲೆ ಗಾಯನ: ವಾಣಿ ಜಯರಾಮ್
ರಾಗ: ಮಾಲ್ಕೌಂಸ್ (ಹಿಂದೋಳಮ್)