ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಅಳೆದಳೆದು ಅಳೆದಳೆದು ನೋಡೊ ಹೆಣ್ಣಂಗಳ ತಕರಾರಿದು
ಪುರುಷ ಪ್ರಾಮಾಣಿಕನೇ ಏನಾದರಸು ಗೀತಾಸಂದೇಶವಿದು
ಅಳೆದಳೆದು ಅಳೆದಳೆದು ನೋಡು ಹೆಣ್ಣಂಗಳ ತಕರಾರಿದು
ಸ್ನೇಹದ ಸ್ಪರ್ಶದಲಿ, ಸೋಗಿನ ಸೋಂಕಿಹುದೇ, ಕೇಳು ಕೇಳು ನನ್ನ ಕಣ್ಣಿನಾಳದ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಮುತ್ತುಗಳ ಮುಂದೊಡ್ಡಿ, ಮುಂದೂಡಿ ಸೋಲಿಸೊ ಸನ್ನಾಹವೇ ... ಓಹೋಹೋ
ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಅಧರ ಅನುಭವದೇ , ಕಾಡಿದೆ ಎದೆಯಾಳ
ಆಡು ಆಡು, ಅಂತರಂಗದಾಳದ ಜೊತೆ ಮಾತಾಡು
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
———-
Original Movie: Chirag
Music: Madan Mohan
Singer: Mohammed Rafi
Raga: Jhinjoti
Taala: Dadra
Kannada Lyrics: Hamsalekha
Thursday, December 12, 2019
Kannada Song, "Kannanchina Ee Maathali ..." (ಚಿತ್ರ : ದಾರಿ ತಪ್ಪಿದ ಮಗ, "ಕಣ್ಣಂಚಿನ ಈ ಮಾತಲಿ ...")
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧು ಮೈತ್ರಿಯ ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಹೊಂದಿದೆ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೆ
ಸರಿ ಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
———-
ಚಿತ್ರ : ದಾರಿ ತಪ್ಪಿದ ಮಗ ೧೯೭೫
ರಚನೆ : ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ : ಪಿ. ಬಿ. ಶ್ರೀನಿವಾಸ್
ತಾರಾಗಣ : ಡಾ. ರಾಜ್ ಕುಮಾರ್ ಮತ್ತು ಆರತಿ
Kannada Song, "Sharadhe Daye Thoridhe ..." (ಚಲನ ಚಿತ್ರ: ಮಲಯ ಮಾರುತ, "ಶಾರದೆ ದಯೆ ತೋರಿದೆ ...")
ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ, ವಲ್ಲಕಿ ವ್ಯಘ್ರಹಸ್ತೆ
ಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂ
ವಿದ್ಯೆ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆ
ಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….||
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ || Pallavi ||
ಹಾಲ ಬೆಳಕಿನಲಿ, ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ
ಏಳು ಮಗುವೆ, ಮೇಲೇಳು ಎಂದು, ಹೊಸ ಬಾಳ ತಂದೆಯಮ್ಮ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ್ಯ ಹಿಡಿದೇ
ಕಂದ ಏಕಳುವೆ ಮುಂದೆ ದಾರಿಯಿದೆ, ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ಇಂದು ನಿನ್ನ ಕೃಪೆಯಿಂದ ನಾನು, ಆನಂದ ಪಡೆದೆನಮ್ಮ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ …………ಶಾರದೆ, ಶಾರದೆ …………ಶಾರದೆ,
=====
ಚಲನ ಚಿತ್ರ: ಮಲಯ ಮಾರುತ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯಶಂಕರ
ಹಿನ್ನೆಲೆ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ (ಕೆ. ಜೆ. ಯೇಸುದಾಸ್)
ರಾಗ: ಮಲಯಾ ಮಾರುತ
Kannada Bhava Geethe: "ಒಂದೇ ಒಂದು ಘಳಿಗೆಯಲ್ಲಿ ..."
ಒಂದೇ ಒಂದು ಘಳಿಗೆಯಲ್ಲಿ, ಇಡಿಯ ಬದುಕು ನೀಡಿದೆ
ಒಂದು ಪುಟ್ಟ ಶಂಖದಲ್ಲಿ ಕಡಲ ಮೊರೆತ ಅಡಗಿದೆ ।। ಪ ।।
ಸುತ್ತ ಮುತ್ತ ದಟ್ಟ ಕಾಡು, ಪೊದೆಯ ಹಾದಿ ನಡೆಯುವಾಗ
ಇದ್ದಕ್ಕಿದ್ದ ಹಾಗೆತೊರೆಯು ಹರಿವ ಬಯಲು ಕಂಡ ಹಾಗೆ
ಕೆಳಗೆ ಕಾಲ ಸುಡುವ ಮರಳು
ನೆತ್ತಿ ಮೇಲೆ ಉರಿವ ಬಿಸಿಲು
ಇದ್ದಕ್ಕಿದ್ದ ಹಾಗೆ ಯಾರೋ ನೆರಳ ಕೊಡೆಯ ಬಿಡಿಸಿದಂತೆ
ಬದುಕು ಒಂದೇ ಶ್ರುತಿಯ ಹಿಡಿದು
ಕಾಯುತಿರಲು ಹಾಡಿಗೆ
ಒಮ್ಮಿಂದೊಮ್ಮೆ ತುಂಬಿದಂತೆ ದೇವಗಾನ ಬಾಳಿಗೆ
ಅಂಬೆಗಾಲನಿಟ್ಟು ಕಾಲ ತೆವಳುತಿರಲು ಮೆಲ್ಲಗೆ
ಇದ್ದಕಿದ್ದ ಹಾಗೆ ಬಂತು ಜಿಂಕೆ ಓಟ ಸಮಯಕೆ
ಜೀವವೆಂಬ ಪಂಜರದಲಿ
ಮಿಡುಕುತಿರಲು ಆತ್ಮವು
ನಿನ್ನ ಒಂದೇ ಒಂದು ನೋಟ
ತೋಯಿಸಿಹುದು ಆತ್ಮಾವ
———
ಸಾಹಿತ್ಯ: ಶ್ರೀಮತಿ ರಂಜಿನಿ ಪ್ರಭು
ಒಂದು ಪುಟ್ಟ ಶಂಖದಲ್ಲಿ ಕಡಲ ಮೊರೆತ ಅಡಗಿದೆ ।। ಪ ।।
ಸುತ್ತ ಮುತ್ತ ದಟ್ಟ ಕಾಡು, ಪೊದೆಯ ಹಾದಿ ನಡೆಯುವಾಗ
ಇದ್ದಕ್ಕಿದ್ದ ಹಾಗೆತೊರೆಯು ಹರಿವ ಬಯಲು ಕಂಡ ಹಾಗೆ
ಕೆಳಗೆ ಕಾಲ ಸುಡುವ ಮರಳು
ನೆತ್ತಿ ಮೇಲೆ ಉರಿವ ಬಿಸಿಲು
ಇದ್ದಕ್ಕಿದ್ದ ಹಾಗೆ ಯಾರೋ ನೆರಳ ಕೊಡೆಯ ಬಿಡಿಸಿದಂತೆ
ಬದುಕು ಒಂದೇ ಶ್ರುತಿಯ ಹಿಡಿದು
ಕಾಯುತಿರಲು ಹಾಡಿಗೆ
ಒಮ್ಮಿಂದೊಮ್ಮೆ ತುಂಬಿದಂತೆ ದೇವಗಾನ ಬಾಳಿಗೆ
ಅಂಬೆಗಾಲನಿಟ್ಟು ಕಾಲ ತೆವಳುತಿರಲು ಮೆಲ್ಲಗೆ
ಇದ್ದಕಿದ್ದ ಹಾಗೆ ಬಂತು ಜಿಂಕೆ ಓಟ ಸಮಯಕೆ
ಜೀವವೆಂಬ ಪಂಜರದಲಿ
ಮಿಡುಕುತಿರಲು ಆತ್ಮವು
ನಿನ್ನ ಒಂದೇ ಒಂದು ನೋಟ
ತೋಯಿಸಿಹುದು ಆತ್ಮಾವ
———
ಸಾಹಿತ್ಯ: ಶ್ರೀಮತಿ ರಂಜಿನಿ ಪ್ರಭು
Kannada Movie Song, "Aakaasha Deepavu Neenu..." (ಕನ್ನಡ ಚಿತ್ರ: ಪಾವನ ಗಂಗಾ, "ಆಕಾಶ ದೀಪವು ನೀನು ...")
Karaoke ಸಾಹಿತ್ಯ:
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು || Pallavi ||
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನು ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿವೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
—————————
ರಚನೆ: ಚಿ. ಉದಯಶಂಕರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ಮತ್ತು ನಾಗೇಂದ್ರ
Subscribe to:
Posts (Atom)