Thursday, December 12, 2019

Kannada Bhava Geethe: "ಒಂದೇ ಒಂದು ಘಳಿಗೆಯಲ್ಲಿ ..."

ಒಂದೇ ಒಂದು ಘಳಿಗೆಯಲ್ಲಿ, ಇಡಿಯ ಬದುಕು ನೀಡಿದೆ
ಒಂದು ಪುಟ್ಟ ಶಂಖದಲ್ಲಿ ಕಡಲ ಮೊರೆತ ಅಡಗಿದೆ    ।। ಪ ।।

ಸುತ್ತ ಮುತ್ತ ದಟ್ಟ ಕಾಡು, ಪೊದೆಯ ಹಾದಿ ನಡೆಯುವಾಗ
ಇದ್ದಕ್ಕಿದ್ದ ಹಾಗೆತೊರೆಯು ಹರಿವ ಬಯಲು ಕಂಡ ಹಾಗೆ

ಕೆಳಗೆ ಕಾಲ ಸುಡುವ ಮರಳು
ನೆತ್ತಿ ಮೇಲೆ ಉರಿವ ಬಿಸಿಲು
ಇದ್ದಕ್ಕಿದ್ದ ಹಾಗೆ ಯಾರೋ ನೆರಳ ಕೊಡೆಯ ಬಿಡಿಸಿದಂತೆ

ಬದುಕು ಒಂದೇ ಶ್ರುತಿಯ ಹಿಡಿದು
ಕಾಯುತಿರಲು ಹಾಡಿಗೆ
ಒಮ್ಮಿಂದೊಮ್ಮೆ ತುಂಬಿದಂತೆ ದೇವಗಾನ ಬಾಳಿಗೆ

ಅಂಬೆಗಾಲನಿಟ್ಟು ಕಾಲ ತೆವಳುತಿರಲು ಮೆಲ್ಲಗೆ
ಇದ್ದಕಿದ್ದ ಹಾಗೆ ಬಂತು ಜಿಂಕೆ ಓಟ ಸಮಯಕೆ

ಜೀವವೆಂಬ ಪಂಜರದಲಿ
ಮಿಡುಕುತಿರಲು ಆತ್ಮವು
ನಿನ್ನ ಒಂದೇ ಒಂದು ನೋಟ
ತೋಯಿಸಿಹುದು ಆತ್ಮಾವ
———

ಸಾಹಿತ್ಯ: ಶ್ರೀಮತಿ ರಂಜಿನಿ ಪ್ರಭು

No comments:

Post a Comment