ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ
ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!
ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!
ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ
ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?
ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು
ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ
ಯಾವುದೂ ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು
ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು
ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ
ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ...
ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!
ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ
ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ
ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ
ಆದರೆ ಎಲ್ಲರೂ, ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ, ಎಚ್ಚರ!
ಸಾಹಿತಿ: ಶ್ರೀ. ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾ
Monday, January 21, 2019
Friday, January 18, 2019
"ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ ..."
ನನ್ನ ದೇಹದ ಬೂದಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು
ಸಾಹಿತಿ: ದಿನಕರ ದೇಸಾಯಿ
Thursday, January 17, 2019
ಆಚೆ ಮನೆಯ ಸುಬ್ಬಮ್ಮನಿಗೆ ... (Folk Song)
ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ|
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ||
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ|
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ||
ಮಧ್ಯಾನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ|
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ||
ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು|
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||
ಸಾಹಿತಿ: ಸಿ. ಆರ್. ಸತ್ಯ
ಏಕಾದಶಿ ಉಪವಾಸ|
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ||
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ|
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ||
ಮಧ್ಯಾನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ|
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ||
ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು|
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||
ಸಾಹಿತಿ: ಸಿ. ಆರ್. ಸತ್ಯ
Tuesday, January 15, 2019
ಹೊಸ ವರ್ಷ ಬಂದಂತೆ ಯಾರು ಬಂದಾರು
ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು || ಹೊಸ ||
ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ || ಹೊಸ ||
ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ || ಹೊಸ ||
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ || ಹೊಸ ||
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು || ಹೊಸ ||
ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ || ಹೊಸ ||
ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ || ಹೊಸ ||
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ || ಹೊಸ ||
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
Friday, January 4, 2019
Kannada Movie Song: "Hey Shilpi, Hey Kalabrahma ..." (ಕನ್ನಡ ಚಿತ್ರಗೀತೆ: "ಹೇ ಶಿಲ್ಪಿ, ಹೇ ಕಲಾಬ್ರಹ್ಮ ...")
Actual Lyrics:
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ ।। ಪಲ್ಲವಿ ।।
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ ।। ಚರಣ ೧ ।।
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ ।। ಚರಣ ೨ ।।
Song Lyrics:
[ ಆ ... sss ... ಆ ... sss (ಆಲಾಪ) ]
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
[ ಸ, ರಿ, ಗ, ಮ, ಪ, ದ, ನೀ, ಸ (ಸಂಗಡಿಗರ ಆಲಾಪ) ]
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಚಲನಚಿತ್ರ: ರಾಗ ತಾಳ (೧೯೮೨)
ಸಂಗೀತ: ಎಮ್. ರಂಗ ರಾವ್
ಸಾಹಿತ್ಯ: ನಂದಗೋಪಾಲ ರೆಡ್ಡಿ
ಹಿನ್ನೆಲೆ ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ರಾಗ: ???
ತಾಳ: ???
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ ।। ಪಲ್ಲವಿ ।।
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ ।। ಚರಣ ೧ ।।
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ ।। ಚರಣ ೨ ।।
Song Lyrics:
[ ಆ ... sss ... ಆ ... sss (ಆಲಾಪ) ]
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
[ ಸ, ರಿ, ಗ, ಮ, ಪ, ದ, ನೀ, ಸ (ಸಂಗಡಿಗರ ಆಲಾಪ) ]
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಚಲನಚಿತ್ರ: ರಾಗ ತಾಳ (೧೯೮೨)
ಸಂಗೀತ: ಎಮ್. ರಂಗ ರಾವ್
ಸಾಹಿತ್ಯ: ನಂದಗೋಪಾಲ ರೆಡ್ಡಿ
ಹಿನ್ನೆಲೆ ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ರಾಗ: ???
ತಾಳ: ???
Subscribe to:
Posts (Atom)