ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಅಳೆದಳೆದು ಅಳೆದಳೆದು ನೋಡೊ ಹೆಣ್ಣಂಗಳ ತಕರಾರಿದು
ಪುರುಷ ಪ್ರಾಮಾಣಿಕನೇ ಏನಾದರಸು ಗೀತಾಸಂದೇಶವಿದು
ಅಳೆದಳೆದು ಅಳೆದಳೆದು ನೋಡು ಹೆಣ್ಣಂಗಳ ತಕರಾರಿದು
ಸ್ನೇಹದ ಸ್ಪರ್ಶದಲಿ, ಸೋಗಿನ ಸೋಂಕಿಹುದೇ, ಕೇಳು ಕೇಳು ನನ್ನ ಕಣ್ಣಿನಾಳದ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಮುತ್ತುಗಳ ಮುಂದೊಡ್ಡಿ, ಮುಂದೂಡಿ ಸೋಲಿಸೊ ಸನ್ನಾಹವೇ ... ಓಹೋಹೋ
ಕಣ್ಣಲ್ಲಿ ಕಣ್ಣಿರಿಸಿ, ನನ್ನ ಎದೆಯಾಡಿಸುವ ಹುನ್ನಾರವೇ
ಅಧರ ಅನುಭವದೇ , ಕಾಡಿದೆ ಎದೆಯಾಳ
ಆಡು ಆಡು, ಅಂತರಂಗದಾಳದ ಜೊತೆ ಮಾತಾಡು
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ನಲ್ಮೆಯ ನೋಟದಲಿ, ಸಂಶಯ ಕಾಣಿಸಿತೇ
ನೋಡು ನೋಡು, ನನ್ನ ಅಂತರಾಳದ ಈ ಆತುರಾವ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
ಯಾಕೆ ಕಣ್ಣೇ ನಿಟ್ಟಿಸಿ ನೋಡುವೆ, ರೆಪ್ಪೆಗೆಡದೆ
———-
Original Movie: Chirag
Music: Madan Mohan
Singer: Mohammed Rafi
Raga: Jhinjoti
Taala: Dadra
Kannada Lyrics: Hamsalekha
Thursday, December 12, 2019
Kannada Song, "Kannanchina Ee Maathali ..." (ಚಿತ್ರ : ದಾರಿ ತಪ್ಪಿದ ಮಗ, "ಕಣ್ಣಂಚಿನ ಈ ಮಾತಲಿ ...")
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ನವ ಯವ್ವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸುನಾಚುತೆ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೆ
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧು ಮೈತ್ರಿಯ ನಿರೀಕ್ಷೆ ಅಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ
ಪ್ರತಿ ಪ್ರೇಮಿಯ ಬಾಳಲ್ಲಿಯು ಶುಭರಾತ್ರಿ ಹೊಂದಿದೆ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೆ
ಸರಿ ಜೋಡಿಯ ಕಣ್ಣರಸಿದೆ
ಈ ಜೋಡಿಯು ಸವಿನೆನಪಲಿ ಜಗವನ್ನೇ ಮರೆತಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ
ಕಣ್ಣಂಚಿನ ಈ ಮಾ..ತಲಿ ಏನೇನೊ ತುಂಬಿದೆ
———-
ಚಿತ್ರ : ದಾರಿ ತಪ್ಪಿದ ಮಗ ೧೯೭೫
ರಚನೆ : ಚಿ. ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕ : ಪಿ. ಬಿ. ಶ್ರೀನಿವಾಸ್
ತಾರಾಗಣ : ಡಾ. ರಾಜ್ ಕುಮಾರ್ ಮತ್ತು ಆರತಿ
Kannada Song, "Sharadhe Daye Thoridhe ..." (ಚಲನ ಚಿತ್ರ: ಮಲಯ ಮಾರುತ, "ಶಾರದೆ ದಯೆ ತೋರಿದೆ ...")
ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ, ವಲ್ಲಕಿ ವ್ಯಘ್ರಹಸ್ತೆ
ಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂ
ವಿದ್ಯೆ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆ
ಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….||
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ || Pallavi ||
ಹಾಲ ಬೆಳಕಿನಲಿ, ಬಿಳಿಯ ಕಮಲದಲಿ, ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ, ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ
ನಿನ್ನ ಕಂಗಳಾ ಬೆಳಕನು, ನನ್ನ ಕಂಗಳಲಿ ತುಂಬಿದೆ
ಏಳು ಮಗುವೆ, ಮೇಲೇಳು ಎಂದು, ಹೊಸ ಬಾಳ ತಂದೆಯಮ್ಮ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ಅಂಧಕಾರದಲಿ ನೊಂದು ಬಳಲುತಿರೆ, ಬಂದು ಕೈಯ್ಯ ಹಿಡಿದೇ
ಕಂದ ಏಕಳುವೆ ಮುಂದೆ ದಾರಿಯಿದೆ, ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ತಂದೆ ತಾಯಿಯ ಪುಣ್ಯವೊ, ನಾನೆಂದೋ ಮಾಡಿದ ಪೂಜೆಯೂ
ಇಂದು ನಿನ್ನ ಕೃಪೆಯಿಂದ ನಾನು, ಆನಂದ ಪಡೆದೆನಮ್ಮ
ಶಾರದೆ ದಯೆ ತೋರಿದೆ…………ಶಾರದೆ ದಯೆ ತೋರಿದೆ
ನಿನ್ನ… ಕರುಣೆಯ ಕಡಲಲ್ಲಿ ಮುತ್ತಾದೆ…. ನಾ ಮುತ್ತಾದೆ
ಶಾರದೆ …………ಶಾರದೆ, ಶಾರದೆ …………ಶಾರದೆ,
=====
ಚಲನ ಚಿತ್ರ: ಮಲಯ ಮಾರುತ
ಸಂಗೀತ: ವಿಜಯ ಭಾಸ್ಕರ
ಸಾಹಿತ್ಯ: ಚಿ. ಉದಯಶಂಕರ
ಹಿನ್ನೆಲೆ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ (ಕೆ. ಜೆ. ಯೇಸುದಾಸ್)
ರಾಗ: ಮಲಯಾ ಮಾರುತ
Kannada Bhava Geethe: "ಒಂದೇ ಒಂದು ಘಳಿಗೆಯಲ್ಲಿ ..."
ಒಂದೇ ಒಂದು ಘಳಿಗೆಯಲ್ಲಿ, ಇಡಿಯ ಬದುಕು ನೀಡಿದೆ
ಒಂದು ಪುಟ್ಟ ಶಂಖದಲ್ಲಿ ಕಡಲ ಮೊರೆತ ಅಡಗಿದೆ ।। ಪ ।।
ಸುತ್ತ ಮುತ್ತ ದಟ್ಟ ಕಾಡು, ಪೊದೆಯ ಹಾದಿ ನಡೆಯುವಾಗ
ಇದ್ದಕ್ಕಿದ್ದ ಹಾಗೆತೊರೆಯು ಹರಿವ ಬಯಲು ಕಂಡ ಹಾಗೆ
ಕೆಳಗೆ ಕಾಲ ಸುಡುವ ಮರಳು
ನೆತ್ತಿ ಮೇಲೆ ಉರಿವ ಬಿಸಿಲು
ಇದ್ದಕ್ಕಿದ್ದ ಹಾಗೆ ಯಾರೋ ನೆರಳ ಕೊಡೆಯ ಬಿಡಿಸಿದಂತೆ
ಬದುಕು ಒಂದೇ ಶ್ರುತಿಯ ಹಿಡಿದು
ಕಾಯುತಿರಲು ಹಾಡಿಗೆ
ಒಮ್ಮಿಂದೊಮ್ಮೆ ತುಂಬಿದಂತೆ ದೇವಗಾನ ಬಾಳಿಗೆ
ಅಂಬೆಗಾಲನಿಟ್ಟು ಕಾಲ ತೆವಳುತಿರಲು ಮೆಲ್ಲಗೆ
ಇದ್ದಕಿದ್ದ ಹಾಗೆ ಬಂತು ಜಿಂಕೆ ಓಟ ಸಮಯಕೆ
ಜೀವವೆಂಬ ಪಂಜರದಲಿ
ಮಿಡುಕುತಿರಲು ಆತ್ಮವು
ನಿನ್ನ ಒಂದೇ ಒಂದು ನೋಟ
ತೋಯಿಸಿಹುದು ಆತ್ಮಾವ
———
ಸಾಹಿತ್ಯ: ಶ್ರೀಮತಿ ರಂಜಿನಿ ಪ್ರಭು
ಒಂದು ಪುಟ್ಟ ಶಂಖದಲ್ಲಿ ಕಡಲ ಮೊರೆತ ಅಡಗಿದೆ ।। ಪ ।।
ಸುತ್ತ ಮುತ್ತ ದಟ್ಟ ಕಾಡು, ಪೊದೆಯ ಹಾದಿ ನಡೆಯುವಾಗ
ಇದ್ದಕ್ಕಿದ್ದ ಹಾಗೆತೊರೆಯು ಹರಿವ ಬಯಲು ಕಂಡ ಹಾಗೆ
ಕೆಳಗೆ ಕಾಲ ಸುಡುವ ಮರಳು
ನೆತ್ತಿ ಮೇಲೆ ಉರಿವ ಬಿಸಿಲು
ಇದ್ದಕ್ಕಿದ್ದ ಹಾಗೆ ಯಾರೋ ನೆರಳ ಕೊಡೆಯ ಬಿಡಿಸಿದಂತೆ
ಬದುಕು ಒಂದೇ ಶ್ರುತಿಯ ಹಿಡಿದು
ಕಾಯುತಿರಲು ಹಾಡಿಗೆ
ಒಮ್ಮಿಂದೊಮ್ಮೆ ತುಂಬಿದಂತೆ ದೇವಗಾನ ಬಾಳಿಗೆ
ಅಂಬೆಗಾಲನಿಟ್ಟು ಕಾಲ ತೆವಳುತಿರಲು ಮೆಲ್ಲಗೆ
ಇದ್ದಕಿದ್ದ ಹಾಗೆ ಬಂತು ಜಿಂಕೆ ಓಟ ಸಮಯಕೆ
ಜೀವವೆಂಬ ಪಂಜರದಲಿ
ಮಿಡುಕುತಿರಲು ಆತ್ಮವು
ನಿನ್ನ ಒಂದೇ ಒಂದು ನೋಟ
ತೋಯಿಸಿಹುದು ಆತ್ಮಾವ
———
ಸಾಹಿತ್ಯ: ಶ್ರೀಮತಿ ರಂಜಿನಿ ಪ್ರಭು
Kannada Movie Song, "Aakaasha Deepavu Neenu..." (ಕನ್ನಡ ಚಿತ್ರ: ಪಾವನ ಗಂಗಾ, "ಆಕಾಶ ದೀಪವು ನೀನು ...")
Karaoke ಸಾಹಿತ್ಯ:
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು || Pallavi ||
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನು ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿವೆನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು ಮರೆಯಾದಾಗ ನೋವೇನು
ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು
—————————
ರಚನೆ: ಚಿ. ಉದಯಶಂಕರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ಮತ್ತು ನಾಗೇಂದ್ರ
Wednesday, May 22, 2019
Kannada Movie Song, "Kasthuri Emba Ondhu ParimaLavuntu ..." (ಕನ್ನಡ ಚಿತ್ರ: ನಮ್ಮೂರ ಬಸವಿ, "ಕಸ್ತೂರಿ ಎಂಬ ಒಂದು ಪರಿಮಳವುಂಟು ...")
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ತಾಯಿ ಭಾರತಾಂಬೆ ಹರಸಿದಂತ ಕಲಿಗಳು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು
ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು
ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಈಗ ಕಲಿವ ಪಾಠವೇ ಬಾಳ ಬುನಾದಿ
ಮಾನವತೆಯ ರೂಪಿಸುವ ಭದ್ರ ತಳಹದಿ
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಗಾಂಧಿ ನೆಹರು ಶಾಸ್ತ್ರೀ ನಮ್ಮನ್ನಗಲಿ ಹೋದರು
ಪಾರತಂತ್ರದಿಂದ ನಮ್ಮ ಪಾರುಗೈದರು
ಅದನು ಉಳಿಸಿಕೊಳ್ಳುವ ಛಲವ ಬಿಡದಿರು
ತಾಯಿನಾಡಿನಭಿಮಾನಿ ನೀನೇ ಆಗಿರು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕೈಯ್ಯಲ್ಲಾದ ನೆರವು ನೀಡಿ ಅಬಲರಾದರೆ
ಎದುರು ಬಿದ್ದು ಮೈಯ ತೆಯ್ಯಿರಿ ಪ್ರಭಲರಾದರೆ
ನಾಡನುಂಗೋ ದೈತ್ಯ ಶಕ್ತಿ ಅಳಿದುಹೋದರೆ
ರಾಮರಾಜ್ಯ ಕಟ್ಟುವುದಕೆ ನೀವೇ ಆಸರೆ
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ತಾಯಿ ಭಾರತಾಂಬೆ ಹರಸಿದಂತ ಕಲಿಗಳು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಚಿತ್ರ: ನಮ್ಮೂರ ಬಸವಿ (೧೯೮೩)
ಸಾಹಿತ್ಯ: ಹಂಸಲೇಖಾ ಅಥವಾ ಉಗ್ರನರಸಿಂಹ (ಇಬ್ಬರಲ್ಲಿ ಒಬ್ಬರು. ಯಾರು ಅಂತ ಗೊತ್ತಿಲ್ಲ)
ಸಂಗೀತ: ಬಿ. ಎಮ್. ಸೀತಾರಾಮ ರಾಜು
ಹಿನ್ನೆಲೆ ಗಾಯಕರು: ಎಲ್. ವಿ. ರಂಗಸ್ವಾಮಿ ಮತ್ತು ಕಸ್ತೂರಿ ಶಂಕರ
ರಾಗ: ಯಮನ್ (ಕಲ್ಯಾಣಿ, ಕರ್ನಾಟಿಕ್ ಸಂಗೀತದಲ್ಲಿ)
ಕನ್ನಡಕೂ ಅದಕೂ ನಂಟು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ತಾಯಿ ಭಾರತಾಂಬೆ ಹರಸಿದಂತ ಕಲಿಗಳು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು
ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಕಿರಿಯರಾದ ನೀವೆಲ್ಲ ಮುಂದೆ ಹಿರಿಯರು
ನಾಳೆ ನೀವೇ ನಾಡನಾಳೋ ಭಾಗ್ಯವಂತರು
ಈಗ ಕಲಿವ ಪಾಠವೇ ಬಾಳ ಬುನಾದಿ
ಮಾನವತೆಯ ರೂಪಿಸುವ ಭದ್ರ ತಳಹದಿ
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಗಾಂಧಿ ನೆಹರು ಶಾಸ್ತ್ರೀ ನಮ್ಮನ್ನಗಲಿ ಹೋದರು
ಪಾರತಂತ್ರದಿಂದ ನಮ್ಮ ಪಾರುಗೈದರು
ಅದನು ಉಳಿಸಿಕೊಳ್ಳುವ ಛಲವ ಬಿಡದಿರು
ತಾಯಿನಾಡಿನಭಿಮಾನಿ ನೀನೇ ಆಗಿರು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕೈಯ್ಯಲ್ಲಾದ ನೆರವು ನೀಡಿ ಅಬಲರಾದರೆ
ಎದುರು ಬಿದ್ದು ಮೈಯ ತೆಯ್ಯಿರಿ ಪ್ರಭಲರಾದರೆ
ನಾಡನುಂಗೋ ದೈತ್ಯ ಶಕ್ತಿ ಅಳಿದುಹೋದರೆ
ರಾಮರಾಜ್ಯ ಕಟ್ಟುವುದಕೆ ನೀವೇ ಆಸರೆ
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ಕನ್ನಡದ ಮಕ್ಕಳೆಲ್ಲಾ ಹುಲಿಗಳು
ತಾಯಿ ಭಾರತಾಂಬೆ ಹರಸಿದಂತ ಕಲಿಗಳು
ಕಸ್ತೂರಿ ಎಂಬ ಒಂದು ಪರಿಮಳವುಂಟು
ಕನ್ನಡಕೂ ಅದಕೂ ನಂಟು
ಚಿತ್ರ: ನಮ್ಮೂರ ಬಸವಿ (೧೯೮೩)
ಸಾಹಿತ್ಯ: ಹಂಸಲೇಖಾ ಅಥವಾ ಉಗ್ರನರಸಿಂಹ (ಇಬ್ಬರಲ್ಲಿ ಒಬ್ಬರು. ಯಾರು ಅಂತ ಗೊತ್ತಿಲ್ಲ)
ಸಂಗೀತ: ಬಿ. ಎಮ್. ಸೀತಾರಾಮ ರಾಜು
ಹಿನ್ನೆಲೆ ಗಾಯಕರು: ಎಲ್. ವಿ. ರಂಗಸ್ವಾಮಿ ಮತ್ತು ಕಸ್ತೂರಿ ಶಂಕರ
ರಾಗ: ಯಮನ್ (ಕಲ್ಯಾಣಿ, ಕರ್ನಾಟಿಕ್ ಸಂಗೀತದಲ್ಲಿ)
Thursday, March 28, 2019
"ಹಾಡು ಹುಡುಕುವ ಹುಚ್ಚು" : #೧೫ - ಮಾರ್ಚ್ ೨೯, ೨೦೧೯
"ಹಾಡು ಹುಡುಕುವ ಹುಚ್ಚು" : #೧೫ - ಮಾರ್ಚ್ ೨೯, ೨೦೧೯
೦೧:
ಆ ದೇವ ನಮಗಾಗಿ ತಂದ ಸಿರಿಯೆ
ಈ ಮನೆಯ ಸೌಭಾಗ್ಯ ನಿನ್ನ ನಗೆಯೆ
ಅಳಲೇನು ಚಂದ ನನ್ನ ಪುಟ್ಟ ದೊರೆಯೆ
ಹಾಯಾಗಿ ಮಲಗು ನನ್ನ ಜಾಣ ಮರಿಯೆ
೦೨:
ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು
೦೩:
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ದೂರಕೆ ಎಲ್ಲಿ ತೆರಳಿರುವೆ
೦೪:
ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವದನ
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ತೂರಾಡಿ ತೂಗಿ ಹೋದೆ
೦೫:
ನಯನವೊ ಮಿಂಚಿನ ಬಳೆ ಬಳೆ
ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ
ನುಡಿಯಿದು ಮೋಹದ ಬಲೆ ಬಲೆ
೦೬:
ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೋ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೆ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
೦೭:
ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
೦೮:
ಅಂದ ಚೆಂದದ ತಾವರೆಯು ಕೆಂಪಗೆ
ಉದಯಿಸುವ ಸೂರ್ಯನು ಕೆಂಪಗೆ
ಅಸ್ತಮಿಸೋ ಸೂರ್ಯನೂ ಕೆಂಪಗೆ
ಹಣೆಯ ಸಿಂಧೂರವು ಕೆಂಪಗೆ
೦೯:
ಒಲವಿನ ಸವಿ ನೋಟ ಬೀರಿ, ಗೆಲುವಿನ ನವ ಕಾಂತಿ ತೋರಿ
ರಾಗ ರಂಗಾಗಿ ಮಿಡಿದೆ, ಪ್ರೀತಿ ಸಂಗಾತಿ ನೀನಾದೆ
ಒಸಗೆಯ ಅನುಬಂಧ ಹೊಂದಿ, ಬೆಸುಗೆಯ ಅರವಿಂದ ಹಾದಿ
ಸೇರಿ ಸಂಬಂಧ ಪಡೆದೆ, ಹಾಡಿ ಬಾನಾಡಿ ನಾನಾದೆ
ಸುಖಮಯ ಹನಿಯಾಗಿ, ಮಧುಮಯ ಮಣೆಯಾಗಿ
ಇಂದೇ ಆನಂದ ನಮದಾಗಿದೆ
೧೦:
ನಗಲು ನೀನು ಹೂವಂತೆ, ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ, ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ, ಒಲವಿನ ಭಾವವೇನೋ
ಪ್ರಣಯದ ಕವಿತೆಯೇನೊ, ಕಲಿಸಿದೆ ಬಂದು ನೀನು
೧೧:
ಸಂಜೆಯ ಕೆಂಪು ಗಾಳಿಯ ತಂಪು, ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ, ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ, ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
೧೨:
ಸೂರ್ಯನ ಹೊನ್ನಿನ ಬಣ್ಣವೆ ನಾಚಿದೆ ತನುವಿನ ಈ ಕಾಂತಿಗೆ
ಗಗನದ ಕೆಂಪಿನ ವರ್ಣವು ಸೋತಿದೆ ಹವಳದ ನಿನ್ನಧರಕೆ
ಲತೆಯ ಹಾಗೆ ಬಳುಕಿ ನೀನು ಆಡಿ, ಕುಣಿಯುವಾಗ ತನುವಿನಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು, ಚೆಲುವೆ ನಿನಗೆ ಸಾಟಿಯಾರು ಇಂದು
೦೧:
ಆ ದೇವ ನಮಗಾಗಿ ತಂದ ಸಿರಿಯೆ
ಈ ಮನೆಯ ಸೌಭಾಗ್ಯ ನಿನ್ನ ನಗೆಯೆ
ಅಳಲೇನು ಚಂದ ನನ್ನ ಪುಟ್ಟ ದೊರೆಯೆ
ಹಾಯಾಗಿ ಮಲಗು ನನ್ನ ಜಾಣ ಮರಿಯೆ
೦೨:
ಆಕಾಶ ಮೇಲೆ ಇಟ್ಟನು ನಮ್ಮ ಶಿವ
ಪಾತಾಳ ಕೆಳಗೆ ಬಿಟ್ಟನು
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು
೦೩:
ತುಟಿಯಂಚಿನಲ್ಲಿ ನಗೆಮಿಂಚು ಹರಿಸಿ
ಕುಡಿನೋಟದಲ್ಲಿ ನೂರಾಸೆ ತರಿಸಿ
ಹಗಲು ಇರುಳು ಮನದಲ್ಲೆ ನೆಲೆಸಿ
ದೂರಕೆ ಎಲ್ಲಿ ತೆರಳಿರುವೆ
೦೪:
ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವದನ
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ತೂರಾಡಿ ತೂಗಿ ಹೋದೆ
೦೫:
ನಯನವೊ ಮಿಂಚಿನ ಬಳೆ ಬಳೆ
ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ
ನುಡಿಯಿದು ಮೋಹದ ಬಲೆ ಬಲೆ
೦೬:
ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೋ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೆ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ
೦೭:
ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
೦೮:
ಅಂದ ಚೆಂದದ ತಾವರೆಯು ಕೆಂಪಗೆ
ಉದಯಿಸುವ ಸೂರ್ಯನು ಕೆಂಪಗೆ
ಅಸ್ತಮಿಸೋ ಸೂರ್ಯನೂ ಕೆಂಪಗೆ
ಹಣೆಯ ಸಿಂಧೂರವು ಕೆಂಪಗೆ
೦೯:
ಒಲವಿನ ಸವಿ ನೋಟ ಬೀರಿ, ಗೆಲುವಿನ ನವ ಕಾಂತಿ ತೋರಿ
ರಾಗ ರಂಗಾಗಿ ಮಿಡಿದೆ, ಪ್ರೀತಿ ಸಂಗಾತಿ ನೀನಾದೆ
ಒಸಗೆಯ ಅನುಬಂಧ ಹೊಂದಿ, ಬೆಸುಗೆಯ ಅರವಿಂದ ಹಾದಿ
ಸೇರಿ ಸಂಬಂಧ ಪಡೆದೆ, ಹಾಡಿ ಬಾನಾಡಿ ನಾನಾದೆ
ಸುಖಮಯ ಹನಿಯಾಗಿ, ಮಧುಮಯ ಮಣೆಯಾಗಿ
ಇಂದೇ ಆನಂದ ನಮದಾಗಿದೆ
೧೦:
ನಗಲು ನೀನು ಹೂವಂತೆ, ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ, ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ, ಒಲವಿನ ಭಾವವೇನೋ
ಪ್ರಣಯದ ಕವಿತೆಯೇನೊ, ಕಲಿಸಿದೆ ಬಂದು ನೀನು
೧೧:
ಸಂಜೆಯ ಕೆಂಪು ಗಾಳಿಯ ತಂಪು, ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ, ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ, ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
೧೨:
ಸೂರ್ಯನ ಹೊನ್ನಿನ ಬಣ್ಣವೆ ನಾಚಿದೆ ತನುವಿನ ಈ ಕಾಂತಿಗೆ
ಗಗನದ ಕೆಂಪಿನ ವರ್ಣವು ಸೋತಿದೆ ಹವಳದ ನಿನ್ನಧರಕೆ
ಲತೆಯ ಹಾಗೆ ಬಳುಕಿ ನೀನು ಆಡಿ, ಕುಣಿಯುವಾಗ ತನುವಿನಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು, ಚೆಲುವೆ ನಿನಗೆ ಸಾಟಿಯಾರು ಇಂದು
Thursday, March 21, 2019
"ಹಾಡು ಹುಡುಕುವ ಹುಚ್ಚು" : #೧೪ - ಮಾರ್ಚ್ ೨೨, ೨೦೧೭
"ಹಾಡು ಹುಡುಕುವ ಹುಚ್ಚು" : #೧೪ - ಮಾರ್ಚ್ ೨೨, ೨೦೧೭
೦೧:
ರಾಮನಿಗೆ ಕೌಸಲ್ಯೆ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ
೦೨:
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನ ದಿವ್ಯ ಸಂಗಮ
ಶರಧಿ ನದಿಯ ಪ್ರೇಮ ಘೋಷ ಸಂಭ್ರಮ
೦೩:
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈತುಂಬ ಹಾಡಾಗಿ ಬಂತಾಗ
ಪ್ರಣಯದ ದೇವಿಯ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೇ ನಾನಾಗ
೦೪:
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೆ ಇದಲಿ
ಅದರ ಒಡೆತನ ನಿನದೆ ಎಲ್ಲ
ಕೋಮಲ ಎಚ್ಚರವಿರಲಿ
೦೫:
ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು ಕಾಣಿಕೆಯಾಗಿ ತಂತು
೦೬:
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪೇಮದಿ ನಿನ್ನ ಸೇರಿದೆ, ನನ್ನಲೀ ನೀನಾದೆ
೦೭:
ಬಾಳೆoಬ ಕಡಲಲ್ಲಿ ನಾನು
ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ
ಸೆರೆಯಾಗಿ ಮನಸೋತು ನಡೆದೆ
೦೮:
ಓಡ್ತಿಯಾ, ಗುಡುಗುಡುಗು ಓಡ್ತಿಯಾ
ಕಣ್ಕಟ್ಟಿ ಬಂಡಿಯ ಬಿಡ್ತೀಯಾ
ನೋಡ್ತೀಯಾ ದುರುದುರುದು ನೋಡ್ತೀಯಾ
ಬೆರಳ್ಕೊಟ್ರೆ ಕೈಯ್ಯನ್ನೇ ನುಂಗ್ತಿಯಾ
೦೯:
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
೧೦:
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲುಹಿತವಾಗಿ
ಓಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ
೧೧:
ಚೈತ್ರ ವಸಂತವೆ ಮಂಟಪ ಶಾಲೆ
ತಾರಾ ಲೋಕವೆ ದೀಪ ಮಾಲೆ
ಸದಾನುರಾಗವೆ ಸಂಬಂಧ ಮಾಲೆ
ಬದುಕೆ ಭೋಗದ ರಸ ರಾಸ ಲೀಲೆ
೧೨:
ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ
೦೧:
ರಾಮನಿಗೆ ಕೌಸಲ್ಯೆ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ಪಾದ ಸೇವೆಯ ಮಾಡಿ
ಧನ್ಯನಾಗುವೆನಿಂದು ಕರುಣಿಸೋ ದಯಮಾಡಿ
೦೨:
ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರವನದೆ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನ ದಿವ್ಯ ಸಂಗಮ
ಶರಧಿ ನದಿಯ ಪ್ರೇಮ ಘೋಷ ಸಂಭ್ರಮ
೦೩:
ಎಳೆತನ ನನ್ನ ಬಿಟ್ಟು ಓಡೋಡಿ ಹೋದಾಗ
ಹರೆಯವು ಮೈತುಂಬ ಹಾಡಾಗಿ ಬಂತಾಗ
ಪ್ರಣಯದ ದೇವಿಯ ಎದುರಲಿ ಕಂಡಾಗ
ಹೃದಯದ ಕಾಣಿಕೆ ತಂದೇ ನಾನಾಗ
೦೪:
ಪದಗಳು ತುಂಬಿದ ಕವನವಿದಲ್ಲ
ಹೃದಯವೇ ಅಡಗಿದೆ ಇದಲಿ
ಅದರ ಒಡೆತನ ನಿನದೆ ಎಲ್ಲ
ಕೋಮಲ ಎಚ್ಚರವಿರಲಿ
೦೫:
ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು ಕಾಣಿಕೆಯಾಗಿ ತಂತು
೦೬:
ಆಟ ಪಾಠ ನೋಡಿ ನಲಿವ ತಾಯ ಕಾಣದೆ
ಅವಳ ಮಮತೆ ಮಡಿಲಿನಿಂದ ದೂರ ಜಾರಿದೆ
ನಿನ್ನ ನಾನು ನೋಡಲು ಕರುಣೆ ತುಂಬಿ ಕಾಡಲು
ಪೇಮದಿ ನಿನ್ನ ಸೇರಿದೆ, ನನ್ನಲೀ ನೀನಾದೆ
೦೭:
ಬಾಳೆoಬ ಕಡಲಲ್ಲಿ ನಾನು
ಕಂಡೆ ಬಂಗಾರದ ಹೆಣ್ಣು ನೀನು
ಕಣ್ಣಿಂದ ಬಲೆ ಬೀಸಿ ಸೆಳೆದೆ
ಸೆರೆಯಾಗಿ ಮನಸೋತು ನಡೆದೆ
೦೮:
ಓಡ್ತಿಯಾ, ಗುಡುಗುಡುಗು ಓಡ್ತಿಯಾ
ಕಣ್ಕಟ್ಟಿ ಬಂಡಿಯ ಬಿಡ್ತೀಯಾ
ನೋಡ್ತೀಯಾ ದುರುದುರುದು ನೋಡ್ತೀಯಾ
ಬೆರಳ್ಕೊಟ್ರೆ ಕೈಯ್ಯನ್ನೇ ನುಂಗ್ತಿಯಾ
೦೯:
ಹರೆಯದ ಬಾಲೆ ಅರಳಿದ ಮೊಲ್ಲೆ
ಪೂಜೆಗೆ ಮುನ್ನ ಬಾಡಲು ಒಲ್ಲೆ
ಅರಳದ ಬಾಡದ ಅರಗಿಳಿ ನೀನು
ಕಹಿ ವಿಷವಲ್ಲ ಒಲವಿನ ಜೇನು
೧೦:
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲುಹಿತವಾಗಿ
ಓಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ
೧೧:
ಚೈತ್ರ ವಸಂತವೆ ಮಂಟಪ ಶಾಲೆ
ತಾರಾ ಲೋಕವೆ ದೀಪ ಮಾಲೆ
ಸದಾನುರಾಗವೆ ಸಂಬಂಧ ಮಾಲೆ
ಬದುಕೆ ಭೋಗದ ರಸ ರಾಸ ಲೀಲೆ
೧೨:
ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ
Thursday, March 14, 2019
"ಹಾಡು ಹುಡುಕುವ ಹುಚ್ಚು": #೧೩ - ಮಾರ್ಚ್ ೧೫, ೨೦೧೯
"ಹಾಡು ಹುಡುಕುವ ಹುಚ್ಚು": #೧೩ - ಮಾರ್ಚ್ ೧೫, ೨೦೧೯
*೦೧:*
ದಯೆಯಿರದ ದೀನ ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
*೦೨:*
ಕಣ್ಣಾ ಗೊಂಬೆ ನೀನಾದೆ
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ
ಬಂದಿದೆ ಕಣ್ಣಲ್ಲಿ ನಿದ್ದೆ
*೦೩:*
ತಾಯೀ ಒಡಲಿನ
ಕುಡಿಯಾಗಿ ಜೀವನ
ಮೂಡಿ ಬಂದು ಚೇತನ
ತಾಳಲೆಂದು ಅನುದಿನ
*೦೪:*
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ
*೦೫:*
ನಾದಲಹರಿಯ ತೇಲಾಡಿ
ಜಗವ ಮರೆವ
ಆನಂದ ರಾಗದಿ ನಲಿದಾಡಿ
*೦೬:*
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ
ವಿರಹದಾ ಗೀತೆಯ ಹಾಡಿದೆ ಕಿವಿಯಲಿ
*೦೭:*
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖನೀಡುವೆ
ಎಂದೆಂದಿಗೂ ಹೀಗೆ
*೦೮:*
ಶೀಲಾ, ಶೀಲಾ, ಶೀಲಾ
<ಅರ್ಥವಾಗದ ಇಂಗ್ಲಿಷ್ ಶಬ್ದಗಳು, ಆಫ್ರಿಕದ ಕಾಡಿನಲ್ಲಿ >
*೦೯:*
ಕಣ್ಣಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೆ ನೀನೊಮ್ಮೆ ನೋಡು
ಸವಿಯಾದ ನುಡಿಯಲ್ಲಿ ಮೋಹವ ನೀ ತುಂಬಿ
ಒಲವಿನ ರಾಗದಿ ಹಾಡು
*೧೦:*
ಸತ್ಯ ಸುಂದರ ಜೀವನ ರಂಗ
ನಿತ್ಯ ನಿರ್ಮಲ ಅಂತರಂಗ
ಆನಂದ ನೀಡುವ ರಾಗ ತರಂಗ
ಅನುಪಮ ಯೋಗದ ಜೀವ ಗಂಗ
*೧೧:*
ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ
ಗಿಡಮರಗಳು ಕ್ಷೇಮ
*೦೧:*
ದಯೆಯಿರದ ದೀನ ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ
ಉದ್ದಂಡ ಅರುಳೆ ಸುಳಿಸುಳಿದು ಬಾ
*೦೨:*
ಕಣ್ಣಾ ಗೊಂಬೆ ನೀನಾದೆ
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ
ಬಂದಿದೆ ಕಣ್ಣಲ್ಲಿ ನಿದ್ದೆ
*೦೩:*
ತಾಯೀ ಒಡಲಿನ
ಕುಡಿಯಾಗಿ ಜೀವನ
ಮೂಡಿ ಬಂದು ಚೇತನ
ತಾಳಲೆಂದು ಅನುದಿನ
*೦೪:*
ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಂ
*೦೫:*
ನಾದಲಹರಿಯ ತೇಲಾಡಿ
ಜಗವ ಮರೆವ
ಆನಂದ ರಾಗದಿ ನಲಿದಾಡಿ
*೦೬:*
ನೋಡಿದಾ ಕ್ಷಣದಲೇ ನಿಂದೆ ನೀ ಕಣ್ಣಲಿ
ಆಸೆಯ ಹೂಗಳ ಚೆಲ್ಲಿದೆ ಮನದಲಿ
ಹೃದಯದ ವೀಣೆಯ ತಂತಿಯ ಮೀಟುತ
ವಿರಹದಾ ಗೀತೆಯ ಹಾಡಿದೆ ಕಿವಿಯಲಿ
*೦೭:*
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಸವಿಮಾತಲಿ ಸುಖನೀಡುವೆ
ಎಂದೆಂದಿಗೂ ಹೀಗೆ
*೦೮:*
ಶೀಲಾ, ಶೀಲಾ, ಶೀಲಾ
<ಅರ್ಥವಾಗದ ಇಂಗ್ಲಿಷ್ ಶಬ್ದಗಳು, ಆಫ್ರಿಕದ ಕಾಡಿನಲ್ಲಿ >
*೦೯:*
ಕಣ್ಣಲಿ ಕಣ್ಣನ್ನು ಪ್ರೇಮದಿ ಬೆರೆಸುತ
ನಲ್ಲನೆ ನೀನೊಮ್ಮೆ ನೋಡು
ಸವಿಯಾದ ನುಡಿಯಲ್ಲಿ ಮೋಹವ ನೀ ತುಂಬಿ
ಒಲವಿನ ರಾಗದಿ ಹಾಡು
*೧೦:*
ಸತ್ಯ ಸುಂದರ ಜೀವನ ರಂಗ
ನಿತ್ಯ ನಿರ್ಮಲ ಅಂತರಂಗ
ಆನಂದ ನೀಡುವ ರಾಗ ತರಂಗ
ಅನುಪಮ ಯೋಗದ ಜೀವ ಗಂಗ
*೧೧:*
ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ
ಗಿಡಮರಗಳು ಕ್ಷೇಮ
Monday, January 21, 2019
"ಸಾಧ್ಯವಾದರೆ ಓಡು ..."
ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ
ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!
ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!
ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ
ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?
ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು
ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ
ಯಾವುದೂ ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು
ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು
ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ
ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ...
ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!
ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ
ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ
ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ
ಆದರೆ ಎಲ್ಲರೂ, ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ, ಎಚ್ಚರ!
ಸಾಹಿತಿ: ಶ್ರೀ. ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾ
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!
ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ
ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!
ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!
ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ
ತಾಕತ್ತು ನಿನ್ನಲ್ಲಿದೆ
ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?
ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು
ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ
ಯಾವುದೂ ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
ನೀನು ಮಲಗಿದ ಹಾಸಿಗೆ
ನಿನ್ನನ್ನು ಅಹಸ್ಯಪಡುವ ಮುನ್ನ
ಅಲಸ್ಯವನ್ನು ಬಿಡು
ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು
ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ
ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ...
ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!
ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ
ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ
ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ
ಆದರೆ ಎಲ್ಲರೂ, ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ, ಎಚ್ಚರ!
ಸಾಹಿತಿ: ಶ್ರೀ. ಶಿವಕುಮಾರ ಸ್ವಾಮೀಜಿ, ಸಿದ್ದಗಂಗಾ
Friday, January 18, 2019
"ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ ..."
ನನ್ನ ದೇಹದ ಬೂದಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
ನಿಜ ಸೇವೆಗೈಯಲಿಕೆ ಬರಲಿ ಮುಂದು
ಸಾಹಿತಿ: ದಿನಕರ ದೇಸಾಯಿ
Thursday, January 17, 2019
ಆಚೆ ಮನೆಯ ಸುಬ್ಬಮ್ಮನಿಗೆ ... (Folk Song)
ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ|
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ||
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ|
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ||
ಮಧ್ಯಾನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ|
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ||
ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು|
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||
ಸಾಹಿತಿ: ಸಿ. ಆರ್. ಸತ್ಯ
ಏಕಾದಶಿ ಉಪವಾಸ|
ಎಲ್ಲೊ ಸ್ವಲ್ಪ ತಿಂತಾರಷ್ಟೇ
ಉಪ್ಪಿಟ್ಟು ಅವಲಕ್ಕಿ ಪಾಯಸ||
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ|
ಘಂಟೆಗೆ ಎರಡೆ ಸೀಬೆ ಹಣ್ಣು
ಆಗಾಗ ಒಂದೊಂದು ಕಿತ್ತಳೆ||
ಮಧ್ಯಾನಕೆಲ್ಲ ರವೆ ಉಂಡೆ
ಹುರುಳಿ ಕಾಳಿನ ಉಸಲಿ|
ಎಲ್ಲೊ ಸ್ವಲ್ಪ ಬಿಸಿ ಸಂಡಿಗೆ
ಐದೊ ಆರೋ ಇಡ್ಲಿ||
ರಾತ್ರಿ ಗೆ ಪಾಪ ಉಪ್ಪಿಟ್ಟೇ ಗತಿ
ಒಂದ್ ಲೋಟದ ತುಂಬಾ ಹಾಲು|
ಪಕ್ಕದ ಮನೆಯ ರಾಮೇ ಗೌಡರ
ಸೀಮೆ ಹಸುವಿನ ಹಾಲು ||
ಸಾಹಿತಿ: ಸಿ. ಆರ್. ಸತ್ಯ
Tuesday, January 15, 2019
ಹೊಸ ವರ್ಷ ಬಂದಂತೆ ಯಾರು ಬಂದಾರು
ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು || ಹೊಸ ||
ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ || ಹೊಸ ||
ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ || ಹೊಸ ||
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ || ಹೊಸ ||
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
ಗಿಡಮರಕೆ ಹೊಸವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನಾ ಚಿಗುರನ್ನು ತಿನಲು ಕೊಟ್ಟಾರು || ಹೊಸ ||
ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ || ಹೊಸ ||
ಏನಿದೆಯೊ ಇಲ್ಲವೋ ಆಸೆಯೊಂದುಂಟು
ಬಾನಿನಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ಕಪ್ಪಾದರೂ ಮುಗಿಲು ಜರಿಸೀರೆಯಣ್ಣ || ಹೊಸ ||
ನೆನಪುಗಳ ಜೋಲಿಯಲಿ ತೂಗುವುದು ಮನಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು
ನನಸಾಗದಿದ್ದರೂ ಕನಸಿಗಿದೆ ಘನತೆ
ತೈಲ ಯಾವುದೆ ಇರಲಿ ಉರಿಯುವುದು ಹಣತೆ || ಹೊಸ ||
ಸಾಹಿತ್ಯ – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ / ಗಾಯನ – ಸಿ ಅಶ್ವಥ್
Friday, January 4, 2019
Kannada Movie Song: "Hey Shilpi, Hey Kalabrahma ..." (ಕನ್ನಡ ಚಿತ್ರಗೀತೆ: "ಹೇ ಶಿಲ್ಪಿ, ಹೇ ಕಲಾಬ್ರಹ್ಮ ...")
Actual Lyrics:
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ ।। ಪಲ್ಲವಿ ।।
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ ।। ಚರಣ ೧ ।।
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ ।। ಚರಣ ೨ ।।
Song Lyrics:
[ ಆ ... sss ... ಆ ... sss (ಆಲಾಪ) ]
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
[ ಸ, ರಿ, ಗ, ಮ, ಪ, ದ, ನೀ, ಸ (ಸಂಗಡಿಗರ ಆಲಾಪ) ]
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಚಲನಚಿತ್ರ: ರಾಗ ತಾಳ (೧೯೮೨)
ಸಂಗೀತ: ಎಮ್. ರಂಗ ರಾವ್
ಸಾಹಿತ್ಯ: ನಂದಗೋಪಾಲ ರೆಡ್ಡಿ
ಹಿನ್ನೆಲೆ ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ರಾಗ: ???
ತಾಳ: ???
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ ।। ಪಲ್ಲವಿ ।।
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ ।। ಚರಣ ೧ ।।
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ ।। ಚರಣ ೨ ।।
Song Lyrics:
[ ಆ ... sss ... ಆ ... sss (ಆಲಾಪ) ]
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
[ ಸ, ರಿ, ಗ, ಮ, ಪ, ದ, ನೀ, ಸ (ಸಂಗಡಿಗರ ಆಲಾಪ) ]
ಇವಳ ಕಂಗಳಿಗೆ ಸವರಿರುವೆ ಬಾಷ್ಪಗಳ ಸಹಜವನು
ಇವಳಂಗಗಳಿಗೆ ನೀಡಿರುವೆ ಚಲನೆಗಳ ಭಾವವನು
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಇವಳೆದೆಯ ವೀಣೆಯಲಿ ನೂರು ತಂತಿಗಳ ಮೀಟಿ
ಉದಯ ಚೇತನವನ್ನು ವದನಕ್ಕೆ ಪೂಸಿರುವೆ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಇವರರಿಯದೆಡೆಗಳಲಿ ಬಿದ್ದಿದ್ದ ಬಂಡೆಗಳಲ್ಲವೇ
ರತಿಯನ್ನೇ ನಾಚಿಸುವ ನಗ್ನದರಸಿಗಳೀಗಲ್ಲವೇ
ಶಿಲ್ಪಿ ನೀ ಬಡಿ ಬಡಿದು ...
ಶಿಲ್ಪಿ ನೀ ಬಡಿ ಬಡಿದು, ಚೆಲುವ ಕಲ್ಲಿಗೆ ಸುರಿದು
ದೇಗುಲವ ನಿರ್ಮಿಸಿದ ಜನಕ ನೀನಲ್ಲವೇ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಕೋಟಿ ಕಂಗಳ ತಣಿಸಿಹುದೀ ಶಿಲಾಭವನ
ಕಾಲದಂಚಿನವರೆಗೂ, ಇದು ಚಿರನೂತನ
ನಿನಗೆ ಶರಣು, ಗುಡಿಯಲ್ಲವಿದು, ಕಲೆಯ ಉಗ್ರಾಣ
ಹೇ ಶಿಲ್ಪಿ, ಹೇ ಕಲಾಬ್ರಹ್ಮ, ಹೇ ನೈಪುಣ್ಯ
ಚಲನಚಿತ್ರ: ರಾಗ ತಾಳ (೧೯೮೨)
ಸಂಗೀತ: ಎಮ್. ರಂಗ ರಾವ್
ಸಾಹಿತ್ಯ: ನಂದಗೋಪಾಲ ರೆಡ್ಡಿ
ಹಿನ್ನೆಲೆ ಗಾಯನ: ಕೆ. ಜೆ. ಯೇಸುದಾಸ್ ಮತ್ತೂ ಸಂಗಡಿಗರು
ರಾಗ: ???
ತಾಳ: ???
Subscribe to:
Posts (Atom)